ಉಪವಾಸ ಸತ್ಯಾಗ್ರಹ ಮುಕ್ತಾಯ

ಹಿಂದಿನ ಪತ್ರಿಕಾ ಪ್ರಕಟಣೆಗಳು:
10/04/2020:  https://gramsevasangh.org/2020/04/24/pressrelease10042020kan-2/ 
08/04/2020: https://gramsevasangh.org/2020/04/09/pressnote08042020kan/

ಪತ್ರಿಕಾ ಬಿಡುಗಡೆ – 17.04.2020

 ಎಂಟು ದಿನಗಳ ನಂತರ ನಾನು, ಇಂದು ಸಂಜೆ, 17 ಏಪ್ರಿಲ್ 2020, ಉಪವಾಸ ವ್ರತವನ್ನು ಕೊನೆಗೊಳಿಸುತ್ತಿದ್ದೇನೆ. ಒಂದು ಸೀಮಿತ ಉದ್ದೇಶದಿಂದ ವ್ರತವನ್ನು ಕೈಗೊಳ್ಳಲಾಗಿತ್ತು. ಪ್ರಭುತ್ವವನ್ನು ಅಲುಗಾಡಿಸುವುದಾಗಿರಲಿಲ್ಲ ಉದ್ದೇಶ. ಆತ್ಮವಲೋಕನವಾಗಿತ್ತು. ನಾನೂ ಮೊದಲ್ಗೊಂಡು ಹಲವು ಗಾಂಧಿವಾದಿಗಳು ರಚನಾತ್ಮಕ ಕಾರ್ಯಕರ್ತರು ಹಾಗೂ ಪ್ರಗತಿಪರ ಚಿಂತಕರು ಈ ಕೆಲವು ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಂಡಿದ್ದೇವೆ ಹಾಗೂ ನಾವೊಂದು ದೃಢನಿರ್ಧಾರಕ್ಕೆ ಬಂದಿದ್ದೇವೆ.  ಲಾಕ್‍ಡೌನ್ ತೆರವುಗೊಂಡ ನಂತರದಲ್ಲಿ ಬೀದಿಗಿಳಿಯಲಿದ್ದೇವೆ, ಹಸಿದವರತ್ತ, ಕೆಲಸ ಕಳೆದುಕೊಂಡಿರುವವರತ್ತ ತೆರಳಲಿದ್ದೇವೆ.  ಗುಳೆಎದ್ದ ಬಡವರಿರಲಿ, ಗ್ರಾಮೀಣ ರೈತನಿರಲಿ, ಪೇಟೆಯ ಕಾರ್ಮಿಕನಿರಲಿ, ನೇಕಾರ ಚಮ್ಮಾರ ಯಾರೇ ಇರಲಿ ಅವರ ಪರವಾದ ದನಿ ಎತ್ತುವವರಿದ್ದೇವೆ.  ನಾವು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಬಡವರ ಪರವಾದ ಹೋರಾಟಗಳನ್ನು ಹೆಚ್ಚಿನ ದೃಡತೆಯಿಂದ ಮುನ್ನಡೆಸುವವರಿದ್ದೇವೆ. 


ಜೊತೆಗೆ ಮತ್ತೊಂದು ಕಾರ್ಯವನ್ನೂ ಮಾಡಲಿದ್ದೇವೆ.  ಮಹತ್ತರವಾದ ಕಾರ್ಯವದು. ಕುಸಿದು ಬಿದ್ದಿರುವ ರಾಕ್ಷಸ ಆರ್ಥಿಕತೆಯನ್ನು ಗೂಟಕೊಟ್ಟು ನಿಲ್ಲಿಸುವ ಪ್ರಯತ್ನಗಳು ನಡೆಯಲಿವೆ.  ಬಡವರು ಹಾಗೂ ಪ್ರಕೃತಿಯ ಮೇಲೆ ಇಷ್ಟೆಲ್ಲ ದೌರ್ಜನ್ಯ ಎಸಗಿ ನರಕ ಸೃಷ್ಟಿಸಿದ ರಾಕ್ಷಸನನ್ನು ಮತ್ತೆ ಜೀವಂತವಾಗಿಸುವ ಪ್ರಯತ್ನ ಮಾಡಲಿದ್ದಾರೆ ದುರಾಸೆಗೆ ಬಿದ್ದವರು.  ನಾವವರನ್ನು ತಡೆಯುವವರಿದ್ದೇವೆ.  ಪ್ರಭುತ್ವವಾಗಲಿ ಉದ್ಯಮಿಗಳಾಗಲಿ ವಲ್ರ್ಡ್ ಬ್ಯಾಂಕ್ ಆಗಲಿ ಅಮೇರಿಕೆಯಾಗಲಿ ಯಾರೇ ಆಗಲಿ, ದುರಾಸೆಯ ಪ್ರಯತ್ನ ನಡೆಸಿದರೆ ಅವರ ವಿರುದ್ಧ ಅಹಿಂಸಾತ್ಮಕ ಯುದ್ಧ ಸಾರುವವರಿದ್ದೇವೆ.  
ಉಪವಾಸವ್ರತದ ಸಂದರ್ಭದಲ್ಲಿ ನೀವೆಲ್ಲ ನೈತಿಕ ಬೆಂಬಲ ನೀಡಿ ಸಹಕರಿಸಿದ್ದೀರಿ. ಪೋಲೀಸರು ಸೌಜನ್ಯದಿಂದ ನಡೆದುಕೊಂಡಿದ್ದಾರೆ. ಇಂದಿನ ಸಂಕಟದ ಪರಿಸ್ಥಿತಿಯಲ್ಲಿ ಸಂಯಮ ಅಗತ್ಯವಾದ್ದರಿಂದ ಮಾಧ್ಯಮಗಳು ಸಂಯಮದಿಂದ ಸುದ್ಧಿ ಪ್ರಕಟಿಸಿವೆ.  ಇವರೆಲ್ಲರಿಗೂ ನಾವು ಚಿರಋಣಿಯಾಗಿದ್ದೇವೆ.

  ಹೆಚ್ಚಿನ ಮಾಹಿತಿಗೆ ಈ ಲಿಂಕ್ ಬಳಸಿ bit.ly/karonakuch_presskit

-ಪ್ರಸನ್ನ
ರಂಗಕರ್ಮಿ ಮತ್ತು ನಾಟಕಕಾರ,
       ಗ್ರಾಮಸೇವಾಸಂಘ

ನನ್ನ ದು:ಖದ ಕಟ್ಟೆಯೊಡೆದಿತ್ತು!


ಪವಿತ್ರ ಆರ್ಥಿಕತೆಯ ಜಾರಿಗಾಗಿ ಇತ್ತೀಚೆಗೆ ನಾನು ಕೈಗೊಂಡಿದ್ದ ಉಪವಾಸ ವ್ರತವನ್ನು ಬೆಂಬಲಿಸುತ್ತಾ ಕೆಲವು ಸ್ನೇಹಿತರು, ನೀವು ಕೈಗೊಂಡ ವ್ರತದ ಸಮಯ ಸೂಕ್ತವಿರಲಿಲ್ಲ ಎಂದಿದ್ದಾರೆ. ಉಪವಾಸದಂತಹ ಕಠಿಣ ಕ್ರಮವನ್ನು ಕೈಗೊಳ್ಳುವ ಮೊದಲು ಯೋಚಿಸಿ ನಿರ್ಧರಿಸಬೇಕು ಎಂಬುದನ್ನು ನಾನು ಒಪ್ಪುತ್ತೇನೆ. ಗುಳೆ ಎದ್ದಿದ್ದ ಬಡವರ ದೀನ ಮುಖಗಳನ್ನು ಪತ್ರಿಕೆಗಳಲ್ಲಿ ಕಂಡು ಧಿಡೀರನೆ ನಿರ್ಧಾರ ತಳೆದಿದ್ದರೆ ನಿಮ್ಮ ಮಾತು ಒಪ್ಪುತ್ತಿದ್ದೆ. ಆದರೆ ಪರಿಸ್ಥಿತಿ ಹಾಗಿರಲಿಲ್ಲ. ಚರಕ ಮುಚ್ಚಿತ್ತು ! ಚರಕದ ಪರವಾಗಿ ಸಹಾಯ ಯಾಚಿಸಲೆಂದು ಬೆಂಗಳೂರಿಗೆ ಬಂದಿದ್ದೆ. ಹಾಗೆ ಬಂದವನು ಬೆಂಗಳೂರಿನ ನನ್ನ ತಮ್ಮನ ಅನುಕೂಲಕರ ಮನೆಯಲ್ಲಿ, ನಿಮ್ಮಂತೆಯೇ, ಅನುಕೂಲಕರ ಬಂಧಿಯಾಗಿದ್ದೆ. ಆಗ ಗುಳೆ ಕೆಲಸಗಾರರ ಮುಖ ಪತ್ರಿಕೆಗಳಲ್ಲಿ ಕಂಡೆ. ನನ್ನ ದು:ಖದ ಕಟ್ಟೆಯೊಡೆಯಿತು. ಯಾವ ಸಂಸ್ಥೆಯನ್ನು, ಬಡವರು ಗುಳೆ ಏಳಬೇಕಾದ ಸಂದರ್ಭವೇ ಬಾರದಿರಲಿ ಎಂದು, ಎರಡೂವರೆ ದಶಕ ದುಡಿದು ಕಟ್ಟಿದ್ದೆನೋ, ಯಾವುದು ಪವಿತ್ರ ಆರ್ಥಿಕತೆಗೊಂದು ಗಟ್ಟಿ ಮಾದರಿಯಾಗತೊಡಗಿತ್ತೋ, ಅಂತಹ ಚರಕ ತನ್ನದೇನೂ ತಪ್ಪಿರದೆ ಮುಚ್ಚಿತ್ತು. ಇತ್ತ ಇಡೀ ದೇಶದ ಬಡವರು ಹಸಿದ ಹುಳುಗಳಂತೆ ಮೇಲೆದ್ದು ಹರಿದಾಡತೊಡಗಿದ್ದರು. ತಮ್ಮದಾದ ಯಾವುದೇ ತಪ್ಪಿರದ ಈ ದೇವರಮಕ್ಕಳಿಗೆ ಶಿಕ್ಷೆ ನೀಡುತ್ತಿರುವ ನಾವು ಪಾಪಿಗಳು ಅನ್ನಿಸಿತು. ಉಪವಾಸ ಕುಳಿತೆ.
-ಪ್ರಸನ್ನರಂಗಕರ್ಮಿ ಮತ್ತು ನಾಟಕಕಾರಗ್ರಾಮಸೇವಾಸಂಘ#SacredEconomy #Karonakuch#MonsterEconomy #GramSevaSangh 
www.gramsevasangh.or | Email ID: gramsevasanghindia@gmail.com | Mobile: 998004391

सत्य का बंधक

मैं शुक्रवार, 10 अप्रैल 2020, से ‘पवित्र आर्थिकी’ (#SacredEconomy) के लिए अनिश्चित कालीन उपवास पर हूँ. चूँकि मैं एक रंगकर्मी हूँ आप कह सकते हैं कि यह उपवास एक नाटक है, यह भी कि एक अहिंसक आतंकवादी का बंधक-नाटक. वास्तव में मैंने खुद को सत्य का बंधक बना लिया है और अभी एक छोटे से कमरे में हूँ, जिसका ठिकाना ज़ाहिर नहीं किया है. मैं आपको सोचने के लिए बाध्य करना चाहता हूँ. 

सच बोलने के लिए मैंने खुद को भूख की पीड़ा के हवाले किया है. हम लोग राक्षसी आर्थिकी के बंधक हो गए हैं. इस आर्थिकी ने  प्रकृति का विनाश किया है, गरीब को और गरीब बनाया है और सब लोगों को मशीन बना दिया है. भगवान ने अब राक्षस को सजा दी है. वह अब मर रहा है. 

लेकिन क्या हम उसे ढहाने के लिए तैयार हैं? क्या हम प्रकृति के नियमों का पालन करने के लिए तैयार हैं? या उस नैतिक नियम का, जो हमें एक बराबरी का समाज, सरल समाज बनाने के लिए कहता है. 

सोचिये ! मैं आश्वस्त हूँ आप सच्चाई से सोचेंगे ! मैं आश्वस्त हूँ यह बंधक-नाटक सफल होगा. हमारे इस आवाहन का जवाब सोशल मीडिया पर दें. कृपया लॉक डाउन का पालन करें. 

प्रसन्ना

नाटक लेखक व निर्देशक 

ग्राम सेवा संघ

अनुवाध : सुनील सहस्रा भूढ़े, दार्शनिक & सामाजिक कार्यकर्ता