Support Magan Khadi Artisans

An Appeal to Magan Khadi Supporter

The sudden outbreak of Covid 19 and the extension of lockdown to  two months have brought Magan Khadi production and sales to a grinding halt and 350 artisans and Khadi workers associated with Magan Khadi are on the verge of losing their livelihood.
Till now with your love and support we crossed many hurdles and reached where we are. Now again in time of this crises we look to you for support.

How can you Help us?

Pay Now & Shop Later  

We request you to purchase a Magan Khadi Coupon for any amount that you can spare for the cause. You can use the coupon to purchase product of your choice once our sale outlet is open. As token of our gratitude for your kind gesture we offer a discount of 10% on your purchase.

Please see details below

Steps to Purchase Magan Khadi Voucher

1.Transfer amount to the following bank account

Bank Name: Canara Bank( Wardha Branch)

Account Name: Magan Sangrahalaya Samiti

Account Number: 2632101004868

IFC Code: CNRBO 002632 MIRC Code: 442015001


 2. Send a Message to +91 9970070558, Transaction Id, Your name and amount, Email ID


3. Ensure that you receive an acknowledgement in return with your voucher number within three days.

4. Walk into Magan Khadi store, Maharashtra. Purchase your product and provide the voucher number and  your purchase will be validated.


Terms & Conditions:

1. This voucher is an advance payment towards a future purchase. 

2. The minimum voucher value is Rs.500. There is no maximum limit.

3. Voucher purchase is a limited periods offer from 15th  April to 15th  May 2020 

4. The vouchers are exclusively made for purchases. from Magan Khadi store and WhatsApp purchases.

5. The voucher  amount is non-transferable 

6. The voucher is valid till 31 March 2021.

7. Discount will be applicable to voucher purchases only ( No additional discount will be applicable)

A Letter from Chairperson of the Magan Sangrahalaya Samiti & Handloom & Khadi Activist Vibha Gupta

Dear Magan Khadi well-wishers,

We are hoping that you and your family are safe & healthy.
Sadly, the nationwide Corona virus lockdown has led to closing down of our Magan Khadi retail outlet. The survival of our Khadi unit depends on the proceeds from the sales of Magan Khadi. With the earnings from sales having reduced to zero we have practically no funds to pay our sliver unit workers, spinners, weavers, knitters, bobbin makers, dyers, printers, tailors, shopkeepers, and the management team. We are even unable to pay the tribal families who collect the natural dyeing material from the forest for us. Most of these artisans and tribal groups are extremely poor and live below poverty line. Hence losing livelihood has become a question of life and death for them. We have been managing to support them so far with the means at our disposal. But now, with the sell of khadi having come down to zero,  supporting these 350+ Magan Khadi artisans is becoming more and more difficult for us.

You have always been a great supporter and well-wisher of Magan Khadi. Keeping that in mind we hereby are reaching out to you as  to help us out in the current financial crisis. We have chalked out a plan that could be beneficial for both you and us. As per this scheme you could  purchase  Magan Khadi – Pay Now & Buy Later Voucher, for any amount that you want to  (The last date of purchase of voucher is 15th May 2020) .You can use the Magan Khadi voucher till March 2021 for  purchase of any product from Magan Khadi store. As a token of gratitude for your timely assistance we offer 10% discount on your purchase.By participating in this scheme you can help our poor women spinners and the weavers and save them from starvation.

We and our artisans will always be grateful to you for your valuable assistance. 

As always, we count on your generosity!

Thanks & Regards

Dr. Vibha Gupta, Chairperson MSS  & Mukesh Lutade, Natural Dye Expert

Sacred Economy Fast Ends

Previous press releases:
10th April 2020: https://gramsevasangh.org/2020/04/10/pressrelease10042020eng/ 
8th April 2020: 
https://gramsevasangh.org/2020/04/09/pressnote08042020 

Press Release – 17.04.2020

Sacred Economy Fast Ends – Prasanna

After eight days of fasting, I am concluding my fast, at 5 p.m. April 17, 2020.  This vow was taken with a limited purpose.  The purpose was not to protest against the current political regime, though they immensely deserve to be protested, but to introspect. Consequently several Gandhians, constructive activists and progressive thinkers, including myself, have engaged in a process of introspection and have arrived at a resolution.

Once the lockdown is lifted, we have decided to reach out to the hungry and the jobless. Whether they be migrant workers, village farmers, urban workers, weavers or cobblers, we will continue to raise our voice in their support, as most of us were already been doing. We will take this struggle forward. 

We are going to take up another task, a task of tremendous significance. There is going to be an insidious effort by the greedy vested interest to prop up the collapsed Monster Economy. The Monster Economy, as you all know, has already created hell for the poor as well as for nature. We shall prevent any such effort at resurrecting the Monster. Be it from the Authorities, Industrialists, the World Bank, or Global Economies, we will declare a non-violent war against them if they try to do so.

During the fast you have given us great moral support. The police have also been very civil. The media has shown restraint in publishing about the fast, because of the Carona emergency. We are grateful to all of them and specially to you.

                                                                                                                            -Prasanna

Theatre Activist and Playwright

                Gram Seva Sangh

For more details see this link: bit.ly/karonakuch_presskit

Gram Seva Sangh

www.gramsevasangh.org | Email ID: gramsevasanghindia@gmail.com | Mobile: 998004391

ಉಪವಾಸ ಸತ್ಯಾಗ್ರಹ ಮುಕ್ತಾಯ

ಹಿಂದಿನ ಪತ್ರಿಕಾ ಪ್ರಕಟಣೆಗಳು:
10/04/2020:  https://gramsevasangh.org/2020/04/24/pressrelease10042020kan-2/ 
08/04/2020: https://gramsevasangh.org/2020/04/09/pressnote08042020kan/

ಪತ್ರಿಕಾ ಬಿಡುಗಡೆ – 17.04.2020

 ಎಂಟು ದಿನಗಳ ನಂತರ ನಾನು, ಇಂದು ಸಂಜೆ, 17 ಏಪ್ರಿಲ್ 2020, ಉಪವಾಸ ವ್ರತವನ್ನು ಕೊನೆಗೊಳಿಸುತ್ತಿದ್ದೇನೆ. ಒಂದು ಸೀಮಿತ ಉದ್ದೇಶದಿಂದ ವ್ರತವನ್ನು ಕೈಗೊಳ್ಳಲಾಗಿತ್ತು. ಪ್ರಭುತ್ವವನ್ನು ಅಲುಗಾಡಿಸುವುದಾಗಿರಲಿಲ್ಲ ಉದ್ದೇಶ. ಆತ್ಮವಲೋಕನವಾಗಿತ್ತು. ನಾನೂ ಮೊದಲ್ಗೊಂಡು ಹಲವು ಗಾಂಧಿವಾದಿಗಳು ರಚನಾತ್ಮಕ ಕಾರ್ಯಕರ್ತರು ಹಾಗೂ ಪ್ರಗತಿಪರ ಚಿಂತಕರು ಈ ಕೆಲವು ದಿನಗಳಲ್ಲಿ ಆತ್ಮಾವಲೋಕನ ಮಾಡಿಕೊಂಡಿದ್ದೇವೆ ಹಾಗೂ ನಾವೊಂದು ದೃಢನಿರ್ಧಾರಕ್ಕೆ ಬಂದಿದ್ದೇವೆ.  ಲಾಕ್‍ಡೌನ್ ತೆರವುಗೊಂಡ ನಂತರದಲ್ಲಿ ಬೀದಿಗಿಳಿಯಲಿದ್ದೇವೆ, ಹಸಿದವರತ್ತ, ಕೆಲಸ ಕಳೆದುಕೊಂಡಿರುವವರತ್ತ ತೆರಳಲಿದ್ದೇವೆ.  ಗುಳೆಎದ್ದ ಬಡವರಿರಲಿ, ಗ್ರಾಮೀಣ ರೈತನಿರಲಿ, ಪೇಟೆಯ ಕಾರ್ಮಿಕನಿರಲಿ, ನೇಕಾರ ಚಮ್ಮಾರ ಯಾರೇ ಇರಲಿ ಅವರ ಪರವಾದ ದನಿ ಎತ್ತುವವರಿದ್ದೇವೆ.  ನಾವು ಹಿಂದಿನಿಂದಲೂ ನಡೆಸಿಕೊಂಡು ಬಂದಿರುವ ಬಡವರ ಪರವಾದ ಹೋರಾಟಗಳನ್ನು ಹೆಚ್ಚಿನ ದೃಡತೆಯಿಂದ ಮುನ್ನಡೆಸುವವರಿದ್ದೇವೆ. 


ಜೊತೆಗೆ ಮತ್ತೊಂದು ಕಾರ್ಯವನ್ನೂ ಮಾಡಲಿದ್ದೇವೆ.  ಮಹತ್ತರವಾದ ಕಾರ್ಯವದು. ಕುಸಿದು ಬಿದ್ದಿರುವ ರಾಕ್ಷಸ ಆರ್ಥಿಕತೆಯನ್ನು ಗೂಟಕೊಟ್ಟು ನಿಲ್ಲಿಸುವ ಪ್ರಯತ್ನಗಳು ನಡೆಯಲಿವೆ.  ಬಡವರು ಹಾಗೂ ಪ್ರಕೃತಿಯ ಮೇಲೆ ಇಷ್ಟೆಲ್ಲ ದೌರ್ಜನ್ಯ ಎಸಗಿ ನರಕ ಸೃಷ್ಟಿಸಿದ ರಾಕ್ಷಸನನ್ನು ಮತ್ತೆ ಜೀವಂತವಾಗಿಸುವ ಪ್ರಯತ್ನ ಮಾಡಲಿದ್ದಾರೆ ದುರಾಸೆಗೆ ಬಿದ್ದವರು.  ನಾವವರನ್ನು ತಡೆಯುವವರಿದ್ದೇವೆ.  ಪ್ರಭುತ್ವವಾಗಲಿ ಉದ್ಯಮಿಗಳಾಗಲಿ ವಲ್ರ್ಡ್ ಬ್ಯಾಂಕ್ ಆಗಲಿ ಅಮೇರಿಕೆಯಾಗಲಿ ಯಾರೇ ಆಗಲಿ, ದುರಾಸೆಯ ಪ್ರಯತ್ನ ನಡೆಸಿದರೆ ಅವರ ವಿರುದ್ಧ ಅಹಿಂಸಾತ್ಮಕ ಯುದ್ಧ ಸಾರುವವರಿದ್ದೇವೆ.  
ಉಪವಾಸವ್ರತದ ಸಂದರ್ಭದಲ್ಲಿ ನೀವೆಲ್ಲ ನೈತಿಕ ಬೆಂಬಲ ನೀಡಿ ಸಹಕರಿಸಿದ್ದೀರಿ. ಪೋಲೀಸರು ಸೌಜನ್ಯದಿಂದ ನಡೆದುಕೊಂಡಿದ್ದಾರೆ. ಇಂದಿನ ಸಂಕಟದ ಪರಿಸ್ಥಿತಿಯಲ್ಲಿ ಸಂಯಮ ಅಗತ್ಯವಾದ್ದರಿಂದ ಮಾಧ್ಯಮಗಳು ಸಂಯಮದಿಂದ ಸುದ್ಧಿ ಪ್ರಕಟಿಸಿವೆ.  ಇವರೆಲ್ಲರಿಗೂ ನಾವು ಚಿರಋಣಿಯಾಗಿದ್ದೇವೆ.

  ಹೆಚ್ಚಿನ ಮಾಹಿತಿಗೆ ಈ ಲಿಂಕ್ ಬಳಸಿ bit.ly/karonakuch_presskit

-ಪ್ರಸನ್ನ
ರಂಗಕರ್ಮಿ ಮತ್ತು ನಾಟಕಕಾರ,
       ಗ್ರಾಮಸೇವಾಸಂಘ

ಬಸವಣ್ಣ ಅಭಿವೃದ್ಧಿಯ ಹರಿಕಾರನಲ್ಲವೇ?

ಪ್ರಸನ್ನ

ಅಂಬಾನಿ, ಅದಾನಿಗಳು ಮಾತ್ರವೇ ಅಭಿವೃದ್ಧಿಯ ಹರಿಕಾರರೇ? ಅಥವಾ ಲಿಂಗಾಯತ ಖಾನಾವಳಿಗಳನ್ನು ಅತ್ತ ಸರಿಸಿ ಮ್ಯಾಕ್‌ಡೊನಾಲ್ಡ್‌ಗಳನ್ನು ಕರೆತಂದು ಕೂರಿಸಿದರೆ ಆಧುನಿಕತೆಯೇ? ಇತ್ತ ಪುರೋಹಿತಶಾಹಿ ಅಬ್ಬರ, ಅತ್ತ ಬಂಡವಾಳಶಾಹಿ ಅಬ್ಬರ, ಇತ್ತ ಧಾರ್ಮಿಕ ಅಸಹಿಷ್ಣುತೆ, ಅತ್ತ ಆರ್ಥಿಕ ಅಸಹಿಷ್ಣುತೆಗಳನ್ನು ತಂದು ಬಲವಂತ ಹೇರಿದರೆ ಅಭಿವೃದ್ಧಿಯೇ? ಬಸವನು ಹಳಬ; ಹಾಗಾಗಿ ಅಭಿವೃದ್ಧಿಯ ಹರಿಕಾರನಲ್ಲವೇ? ಈ ಪ್ರಶ್ನೆ ನನ್ನನ್ನು ಗಾಢವಾಗಿ ಕಾಡುತ್ತಿದೆ. ಪ್ರಶ್ನೆಯನ್ನೆತ್ತಿಕೊಂಡು ನಾನು ಉತ್ತರ ಕರ್ನಾಟಕಕ್ಕೆ ಹೋದೆ.

ಬಸವನ ಮೂಲ ನೆಲೆಯದು. ಇಂದು ಆ ನೆಲೆ ಹಿಂದುಳಿದಿದೆ. ಅದರ ಅಭಿವೃದ್ಧಿ ಹೇಗಿರಬೇಕು ಎಂಬ ಚರ್ಚೆ ನಡೆದಿದೆ ಅಲ್ಲಿ. ಹಾಗೆ ಚರ್ಚಿಸುತ್ತಿರುವ ಹೆಚ್ಚಿನವರು ಬಸವನ ಅನುಯಾಯಿಗಳೇ ಹೌದು. ಆದರೆ, ಉತ್ತರ ಕರ್ನಾಟಕದ ಹಿಂದುಳಿದಿರುವಿಕೆಗೆ ಬಸವನೇ ಕಾರಣವೋ ಎಂಬಂತೆ, ಆತನ ಮಾದರಿಯನ್ನು ಹಿಂದಕ್ಕೊತ್ತಿ, ಅಂಬಾನಿ– ಅದಾನಿ ಮಾದರಿಯ ಅಭಿವೃದ್ಧಿಯನ್ನು ಮುಂದೊತ್ತುತ್ತಿದ್ದಾರೆ ಅವರು ಅಲ್ಲಿ. ಬಸವಣ್ಣನನ್ನು, ಇತರೆಲ್ಲ ದೈವಗಳಂತೆಯೇ, ವೈಭವೋಪೇತ ಗೃಹಬಂಧನದಲ್ಲಿ ಇರಿಸಿದ್ದಾರೆ.

ಬೆಂಗಳೂರು ಅಥವಾ ನ್ಯೂಯಾರ್ಕು ಅಥವಾ ಲಂಡನ್ನುಗಳನ್ನು ಅಭಿವೃದ್ಧಿಗೆ ಮಾದರಿ ಎಂದು ನಂಬುತ್ತಾರೆ ಇವರು. ಉತ್ತರ ಕರ್ನಾಟಕದ ತುಂಬ ಜಗಜಗಿಸುವ ಖಾಸಗಿ ಕಾಲೇಜುಗಳು ಬರಲಿ, ಫಳಫಳಿಸುವ ಖಾಸಗಿ ಆಸ್ಪತ್ರೆಗಳು ಬರಲಿ, ಒಂದೇ ಸಮನೆ ಹೊಗೆಯುಗುಳುವ ಕಾರ್ಖಾನೆಗಳು ಬರಲಿ, ವಿಮಾನ ನಿಲ್ದಾಣಗಳು ಹಾಗೂ ಪಂಚತಾರಾ ಹೋಟೆಲುಗಳು ಬರಲಿ. ಆಗ ಉ.ಕ. ಅಭಿವೃದ್ಧಿ ಹೊಂದುತ್ತದೆ ಎಂದವರು ನಂಬುತ್ತಾರೆ.

ಹಾಗವರು ನಂಬಲಿಕ್ಕೆ ಕಾರಣವೂ ಇದೆ. ಉ.ಕ.ದಿಂದ ಗುಳೆ ಎದ್ದಿರುವ ಜಾಣ ಮಧ್ಯಮವರ್ಗ ತಲುಪಿರುವುದು ಬೆಂಗಳೂರು ನಗರವನ್ನು. ಸರ್ಕಾರಗಳು, ಸರ್ಕಾರಿ ಅಧಿಕಾರಿಗಳು, ರಾಜಕಾರಣಿಗಳು, ಉದ್ದಿಮೆಪತಿಗಳು ಎಲ್ಲರೂ ಬೆಂಗಳೂರಲ್ಲಿ ಕುಳಿತು ಉ.ಕ.ದತ್ತ ನೋಡುತ್ತಾರೆ. ಬುದ್ಧಿಜೀವಿಗಳು, ಇಲ್ಲಿ ಕುಳಿತು ಅಲ್ಲಿನ ಕೃಷಿ, ಕೈಮಗ್ಗ ಹಾಗೂ ಕುಶಲಕರ್ಮಗಳ ಬಗ್ಗೆ ಚಿಂತಿಸುತ್ತಾರೆ. ಕವಿಗಳು, ಇಲ್ಲಿ ಕುಳಿತು ಅಲ್ಲಿನ ಹಳ್ಳಿಗಳ ಬಗ್ಗೆ ಪದ್ಯ ಬರೆಯುತ್ತಾರೆ… ಇತ್ಯಾದಿ. ಬೆಂಗಳೂರೆಂಬ ಹವಾನಿಯಂತ್ರಿತ ಕೊಠಡಿಯಿಂದಲೇ ಉ.ಕ., ದ.ಕ., ಮ.ಕ. ಇತ್ಯಾದಿ ಎಲ್ಲ ‘ಕ’ಗಳಿಗೂ ಹಣ ಬಿಡುಗಡೆಯಾಗುತ್ತದೆ. ಅಥವಾ ಆಗದೆ ಇರುತ್ತದೆ. ಬೆಂಗಳೂರೇ ನಿಜವಾದ ಕರ್ನಾಟಕವಾಗಿದೆ ಇಂದು. ಇತ್ತ ರೋಗಕ್ಕೆ ಪಕ್ಕಾಗಿರುವ ಕರ್ನಾಟಕದ ಹೃದಯಭಾಗವು ದಿನಗಣನೆ ಮಾಡುತ್ತ ಮಲಗಿಕೊಂಡಿದೆ.

ಬಸವನ ಮಾದರಿಯನ್ನು ಒಪ್ಪುವವರೂ ಇದ್ದಾರೆ. ಅಭಿವೃದ್ಧಿಯೆಂದರೆ, ಜನರ ಅಭಿವೃದ್ಧಿ, ಪರಿಸರ ಹಾಗೂ ಪ್ರಕೃತಿಗಳ ಅಭಿವೃದ್ಧಿ ಎಂದು ತಿಳಿಯುವ ಮಂದಿ ಇದ್ದಾರೆ. ಆದರೆ ಅಲ್ಪಸಂಖ್ಯಾತರು ಇವರು. ಬಹುಸಂಖ್ಯಾತರ ಓಲೈಕೆ ನಡೆದಿರುವ ಇಂದಿನ ಕಾಲಮಾನದಲ್ಲಿ, ಇವರು ಮೂಲೆಗುಂಪಾಗಿದ್ದಾರೆ. ಹೈದರಾಬಾದ್ ಕರ್ನಾಟಕ ಅಭಿವೃದ್ಧಿ ಮಂಡಳಿಯನ್ನು ಹತ್ತಿರದಿಂದ ನೋಡಿಬಲ್ಲ ಇಂತಹ ಒಬ್ಬ ಸಾಮಾಜಿಕ ಕಾರ‍್ಯಕರ್ತರು ನನ್ನೊಟ್ಟಿಗೆ ಮಾತನಾಡುತ್ತಿದ್ದರು. ಅದು ಆರಂಭವಾದ ಮೂರು ವರ್ಷಗಳಲ್ಲಿ, ಮಂಡಳಿಯಿಂದ ಸುಮಾರು ನಾಲ್ಕು ಸಾವಿರದ ಮುನ್ನೂರು ಕೋಟಿ ರೂಪಾಯಿ ಖರ್ಚಾಗಿದೆಯಂತೆ. ಹೆಚ್ಚಿನ ಹಣವು ಯಥಾಪ್ರಕಾರ, ರಸ್ತೆಗಳು ಹಾಗೂ ಕಟ್ಟಡಗಳಿಗೆ ಖರ್ಚಾಗಿದೆಯಂತೆ. ಉಳಿದ ನೂರಿನ್ನೂರು ಕೋಟಿಗಳು ಕುರ್ಚಿ, ಕಂಪ್ಯೂಟರು ಇತ್ಯಾದಿಗಳ ಖರೀದಿಗೆ ಖರ್ಚಾಗಿದೆಯಂತೆ. ಹಣ ಖರ್ಚಾಗದೆ ಉಳಿಯುವುದು, ಉಳಿದು ಬೆಂಗಳೂರಿಗೇ ಮರಳುವುದು ಸಹ ಮಾಮೂಲಿಯಂತೆ. ಏಕೆ ಎಂದು ಕೇಳಿದೆ. ಸ್ಥಾವರ ನಿರ್ಮಾಣದ ಹೊಸಹೊಸ ಉಪಾಯಗಳು ಹೊಳೆಯದೆ ಹೀಗಾಗುತ್ತದೆ ಎಂದು ತುಂಟನಗೆ ಬೀರಿದರು ಅವರು. ಭ್ರಷ್ಟಾಚಾರದ ಚರ್ಚೆ ಅನಗತ್ಯ. ಎಲ್ಲ ಕಡೆ ಇರುವಂತೆ ಇಲ್ಲಿಯೂ ಇದೆ ಅದು ಧಾರಾಳ.

ಉತ್ತರ ಕರ್ನಾಟಕದ ಅಭಿವೃದ್ಧಿ ಹೇಗಿರಬೇಕು ಎಂಬ ಒಂದೆರಡು ಚರ್ಚೆಗಳಲ್ಲಿ ನಾನೂ ಭಾಗವಹಿಸಿದ್ದೆ. ಅಂಬಾನಿ, ಅದಾನಿ ಮಾದರಿಯನ್ನು ತಲೆಕೆಳಗು ಮಾಡಬೇಕೆಂಬ ಉದ್ದೇಶದಿಂದಲೇ ಭಾಗವಹಿಸಿದ್ದೆ. ಬಸವಣ್ಣ ಅಭಿವೃದ್ಧಿಯ ಹರಿಕಾರನಾಗಲಾರನೆ ಎಂಬ ಪ್ರಶ್ನೆಯನ್ನು ಬೇಕೆಂತಲೇ ಸಭಿಕರತ್ತ ಎಸೆಯುತ್ತ ಹೋದೆ. ನನ್ನೆದುರಿಗೆ ಕುಳಿತಿರುತ್ತಿದ್ದ ಹೆಚ್ಚಿನವರು ಬಸವನ ಧಾರ್ಮಿಕ ಅನುಯಾಯಿಗಳು. ಲಿಂಗಾಯತರಲ್ಲದವರೂ ಆತನನ್ನು ಮೆಚ್ಚುವ ಮಂದಿ. ನನ್ನ ಬಾಣವು ಪ್ರತಿಬಾರಿ ತನ್ನ ಗುರಿಯನ್ನು ತಾಕುತ್ತಿತ್ತು. ಆ ಬಸವಣ್ಣ ಧರ್ಮದ ಹರಿಕಾರ ಎಂದು ನಂಬುತ್ತೀರಿ ತಾನೆ?… ಧರ್ಮವೆಂದರೆ ಏನು ಹಾಗಿದ್ದರೆ? ಕಾಯಕವಿಲ್ಲದ ಬಸವಧರ್ಮ ಇದೆಯೆ? ಕಲ್ಯಾಣದ ಆರ್ಥಿಕ ಅಭಿವೃದ್ಧಿಗೆ ಕೊಡುಗೆ ನೀಡಿರದಿದ್ದರೆ ಬಸವನನ್ನು ಬಿಜ್ಜಳ ಇರಗೊಡುತ್ತಿದ್ದನೇ?

ಆ ಬಸವಣ್ಣ, ಆಧುನಿಕ ಅರ್ಥದಲ್ಲಿ, ಉತ್ಪಾದಕರನ್ನು ಸಂಘಟಿಸಿದ! …ಶರಣರು ಶಿಸ್ತಿನಿಂದ ಉತ್ಪಾದನೆ ಮಾಡುವಂತೆ ಮಾಡಿದ! …ತಮ್ಮ ಉತ್ಪಾದನೆಯಿಂದ ಅವರು ದಾಸೋಹ ಮಾಡುವಂತೆ ತಾಕೀತು ಮಾಡಿದ. ಬಡವರೆಲ್ಲ ಶರಣರಾಗಿ ಸಂಘಟಿತರಾದದ್ದರಿಂದಲೇ ಕಲ್ಯಾಣದಲ್ಲಿ ಶಿಸ್ತಿನ ಉತ್ಪಾದನೆ ಸಾಧ್ಯವಾಯಿತು. ಕಲ್ಯಾಣ ಸಮೃದ್ಧವಾಯಿತು. ಸಮೃದ್ಧಿಯ ಮೇಲೆ ಆಶೆಪಟ್ಟೇ ಮೇಲ್ಜಾತಿ, ಮೇಲ್ವರ್ಗಗಳು, ಬಿಜ್ಜಳನ ಮಗ ಜಗದೇವನನ್ನು ಹುಚ್ಚೆಬ್ಬಿಸಿ, ಶರಣರ ರಕ್ತ ಹರಿಸಿದವು. ಅವರಿಗೆ ಅಧಿಕಾರ ಬೇಕಿತ್ತು. ಮುಷ್ಕರವಿಲ್ಲದ ಉತ್ಪಾದನೆ, ಲಂಚ ರುಶುವತ್ತುಗಳಿಲ್ಲದ ಆಡಳಿತ, ಅವ್ಯವಹಾರಗಳಿಲ್ಲದ ವಾಣಿಜ್ಯ, ಕುಡಿತ ವ್ಯಭಿಚಾರಗಳಿಲ್ಲದ ಸಮಾಜ ವ್ಯವಸ್ಥೆ ಬೇಕಿತ್ತವರಿಗೆ. ಆದರೆ ಲಾಭದ ಹಂಚಿಕೆ ಬೇಡವಿತ್ತು. ಬಸವ ಲಾಭದ ಹಂಚಿಕೆ ಮಾಡಿದ. ಬಡವ ಬಲ್ಲಿದರ ನಡುವಣ ಅಂತರವನ್ನು ಕಡಿಮೆ ಮಾಡಿದ. ಹೀಗೇ ಹೇಳುತ್ತಹೋದೆ. ಕೆಲವು ತಲೆಗಳು ಹೌದೆಂಬಂತೆ ಹಿಂದೆ ಮುಂದೆ ಆಡಿದವು. ಮಾತು ಮುಂದುವರೆಸಿದೆ.

ಹಳೆಯ ಧರ್ಮ, ಹೊಸ ಆರ್ಥಿಕತೆ– ಇವು ಬೇರೆಬೇರೆ ಎಂದು ತಿಳಿದಿದ್ದೀರಿ ನೀವು. ದ್ವಂದ್ವಾತ್ಮಕ ನಿಲುವು ತಾಳಿದ್ದೀರಿ ಎಂಬ ಗಂಭೀರ ಆರೋಪ ಮಾಡಿದೆ. ಶ್ರಮ ಹಾಗೂ ಯಂತ್ರ ಒಂದೇ ಎಂಬ ಅಪಾಯಕಾರಿ ನಿಲುವು ತಾಳಿದ್ದೀರಿ ನೀವು ಎಂದೆ. ಬಸವಣ್ಣ ಬದುಕಿದ್ದರೆ ಆತ ಕಾರಿನಲ್ಲಿ ಕುಳಿತು ‘ಕಾಯಕ’ ಮಾಡುತ್ತಿದ್ದ ಎಂದು ನಂಬುತ್ತೀರಿ ನೀವು ಎಂದೆ. ದಾಸೋಹದ ಹೆಸರಿನಲ್ಲಿ ಆತ ಸಾಹುಕಾರರ ಮನೆಗಳಲ್ಲಿ ಭೂರಿಬೋಜನ ಮಾಡುತ್ತಿದ್ದ ಎಂದು ನಂಬುತ್ತೀರಿ ನೀವು ಎಂದೆ. ಹೊಸ ಆರ್ಥಿಕತೆಗೆ ಸಾರಥ್ಯ ನೀಡಿರುವ ಅಂಬಾನಿ, ಅದಾನಿ ಇತ್ಯಾದಿಗಳು ಅಥವಾ ಅವರ ಕನ್ನಡ ಅವತರಿಣಿಕೆಗಳು, ನಿಜಕ್ಕೂ ಸಮಾಜಕಲ್ಯಾಣ ಮಾಡಬಲ್ಲರೇ ಎಂದು ಪ್ರಶ್ನೆ ಮಾಡಿದೆ. ಲಕ್ಷಾಂತರ ಕೋಟಿ ರೂಪಾಯಿಗಳ ತಮ್ಮ ಲಾಭವನ್ನು, ಉತ್ತರ ಕರ್ನಾಟಕದ ಹೊಲಗಳ ತನಕ ಅಥವಾ ಮಗ್ಗದಕುಣಿಗಳ ತನಕ ಇವರು ತಲುಪಿಸುತ್ತಾರೆಯೆ ಎಂದು ಪ್ರಶ್ನೆ ಮಾಡಿದೆ. ಹೊಸ ಅಭಿವೃದ್ಧಿ ಮಾದರಿಯಿಂದಾಗಿ ಬಡವಬಲ್ಲಿದರ ಅಂತರವು, ಬಸವನ ಕಾಲಕ್ಕಿಂತ ಸಾವಿರ ಪಟ್ಟು ಹೆಚ್ಚಾಗಿದೆ ಎಂದು ತಿಳಿದಿದೆಯೆ ನಿಮಗೆ ಎಂದು ಪ್ರಶ್ನೆ ಮಾಡಿದೆ. ನಿಶ್ಶಬ್ದವಾಗಿ ಮಾತು ಕೇಳಿಸಿಕೊಂಡರು. ಮಾತಿನ ಧಾಟಿ ಬದಲಿಸಿದೆ.

ಇಂದಿನ ಬಡವರು, ನುಲಿಯಚಂದಯ್ಯನ ತರಹ, ಇತ್ತ ಶ್ರಮವನ್ನೂ ಪಡುತ್ತಿಲ್ಲ ಅತ್ತ ದಾಸೋಹವನ್ನೂ ಮಾಡುತ್ತಿಲ್ಲ ಏಕೆ ಗೊತ್ತೆ ಎಂದು ಪ್ರಶ್ನಿಸಿದೆ. ಇವರ ಸ್ಥೈರ್ಯವನ್ನು ಹರಣ ಮಾಡಿದವರು ಯಾರು, ಜಾಹೀರಾತುಗಳು, ಟೀವಿ ಹಾಗೂ ಇಂಟರ್‌ನೆಟ್ಟಿನ ಹೊಲಸು ಸೃಷ್ಟಿಸುತ್ತಿರುವವರು ಯಾರು, ಸುತ್ತ ತಾಂಡವವಾಡುತ್ತಿರುವ ಧಾರ್ಮಿಕ ಉಗ್ರವಾದವನ್ನು ಪೋಷಿಸುತ್ತಿರುವವರು ಯಾರು? ಭಕ್ತರನ್ನು ಭಕ್ತಿಯಿಂದ ದೂರ ಸರಿಸುತ್ತಿರುವವರು ಯಾರು? ನಾಟಕೀಯ ಪ್ರಶ್ನೆ ಮಾಡಿದೆ. ಹೊಸ ಆರ್ಥಿಕತೆ, ಹೊಸ ಅಭಿವೃದ್ಧಿ ಮಾದರಿ ಈ ಕೆಲಸ ಮಾಡಿದೆ ಎಂದೆ. ಬಸವನ ಮಾದರಿ ಬೆಳಕಾದರೆ, ಅಂಬಾನಿ, ಅದಾನಿಗಳ ಮಾದರಿ ಕತ್ತಲು ಎಂದು ಗಟ್ಟಿಸಿಹೇಳಿ ಮಾತು ಮುಗಿಸಿದೆ.

ಸಣ್ಣ ವಿರಾಮ ನೀಡಿ ಮಾತು ಮುಂದುವರಿಸಿದೆ. ವಿದೇಶಿ ಕಂಪನಿಗಳ ಏಜೆಂಟು ಈ ಆರ್ಥಿಕತೆ ಅಂದೆ. ತಮ್ಮೂರಿನಲ್ಲಿ ಇವರು ಏಸುಕ್ರಿಸ್ತನಿಗೆ ಏನನ್ನು ಮಾಡಿದ್ದಾರೋ ಅದನ್ನೇ ಇಲ್ಲಿ, ನಿಮ್ಮೂರಲ್ಲಿ, ನಿಮ್ಮ ಬಸವನಿಗೆ ಮಾಡುತ್ತಿದ್ದಾರೆ ಅಂದೆ. ಅಥವಾ, ಪ್ರವಾದಿ ಮಹಮ್ಮದರಿಗೆ ತಮ್ಮೂರಲ್ಲಿ ಇವರು ಮಾಡಿದ್ದನ್ನೇ ನಿಮ್ಮೂರಲ್ಲಿ, ಬಸವ– ಕನಕ– ಪುರಂದರ– ದಾದಾಪೀರ ಎಲ್ಲರಿಗೂ ಮಾಡುತ್ತಿದ್ದಾರೆ ಅಂದೆ. ಧಾರ್ಮಿಕ ಬಂಧನದಲ್ಲಿ ಇರಿಸಿದ್ದಾರೆ ಸಂತರನ್ನು ಅಂದೆ. ಸಾಮಾಜಿಕ ಕೆಲಸಕ್ಕಾಗಿ ಬಿಡುಗಡೆಗೊಳಿಸಿ ಎಂದು ಕರೆ ನೀಡಿದೆ.

‘ಬಂಡೇಳಬೇಕು!… ವಚನಕಾರರಂತೆ ಸೂಫಿಸಂತರಂತೆ ಕ್ರೈಸ್ತಸಂತರಂತೆ ಅಹಿಂಸಾತ್ಮಕವಾಗಿ ಬಂಡೇಳಬೇಕು!… ನೇಗಿಲು, ಮಗ್ಗ, ರಾಟೆ ಹಾಗೂ ವಚನಗಳನ್ನು ಆಯುಧಗಳನ್ನಾಗಿ ಬಳಸಿಕೊಂಡು ಬಂಡೇಳಬೇಕು!… ಹೊಸ ಆರ್ಥಿಕತೆಯ ವಿರುದ್ಧ ಬಂಡೇಳಬೇಕು’ ಅಂದೆ. ಮುಂದುವರೆದು, ಆ ಧರ್ಮ ಹಳೆಯದ್ದೂ ಅಲ್ಲ, ಆರ್ಥಿಕತೆ ಹೊಸತೂ ಅಲ್ಲ!… ಎರಡೂ ಸಮಕಾಲೀನವಾದದ್ದು!… ಸಮಕಾಲೀನ ಕಾಯಕವೇ ಸಮಕಾಲೀನ ಧರ್ಮ ಅಂದೆ. ಒಂದಿಬ್ಬರು ಹೌದು ಹೌದು ಅಂದರು. ಮುಂದುವರೆದೆ. ಆ ಬಸವಣ್ಣನ ಆರ್ಥಿಕತೆ ನೈತಿಕವಾದದ್ದು, ದುಡ್ಡನ್ನು ದಾಸೋಹವಾಗಿಸುತ್ತದೆ ಅದು !… ಸಂಪತ್ತನ್ನು ಸಾರ್ವಜನಿಕವಾಗಿಸುತ್ತದೆ ಅದು!… ನಾಲ್ಕು ಜನರ ಪ್ರೀತಿ ಗಳಿಸುತ್ತದೆ ಅದು! ಅಂದೆ. ಹೌದು ಹೌದು ಅಂದರು.

ಬಸವನ ಆರ್ಥಿಕತೆ ನೋಟು ದ್ವಿಗುಣಗೊಳಿಸುವುದಿಲ್ಲ!… ವಿಪರೀತ ಲಾಭ ತರುವುದಿಲ್ಲ!… ವಿಪರೀತ ಲಾಭ ಬಯಸುವವರು ಬಸವಣ್ಣನ ಬದಲಿಗೆ ಮಂಚಣಕ್ರಮಿತನನ್ನು ದೈವವಾಗಿ ಸ್ವೀಕರಿಸಿರಿ ಅಂದೆ. ಮಾತು ಚುಚ್ಚಿತು. ಮಂಚಣಕ್ರಮಿತ ಬಸವನ ಬದ್ಧವೈರಿ ಎಂಬ ಅರಿವಿತ್ತು ಸಭಿಕರಿಗೆ. ಮೈ ಕೊಡವಿಕೊಂಡು ಕುಳಿತರು ಅವರು. ಅಂಬಾನಿ, ಅದಾನಿಗಳನ್ನು ಹಾಡಿ ಹೊಗಳುವವರು ಮಂಚಣಕ್ರಮಿತನ ಆಧುನಿಕ ರೂಪವೇ ಹೌದು ಎಂಬ ಗಂಭೀರ ಆರೋಪ ಮಾಡಿದೆ. ನಿಮ್ಮ ಕುತ್ತಿಗೆಗೆ ಅವರು ಬಿಗಿದಿರುವ ಮೊಬೈಲುಗಳು ಅನಿಷ್ಟಲಿಂಗಗಳು ಅಂದೆ! ಮಾತಿನ ಭರದಲ್ಲಿ ಅನಿಷ್ಟಲಿಂಗ ಅಂದಿದ್ದೆ. ನಾಲಿಗೆ ಕಚ್ಚಿಕೊಂಡೆ. ಆದರೆ ಅವರು ತಪ್ಪು ತಿಳಿಯಲಿಲ್ಲ. ನನ್ನ ವಿಚಾರಗಳ ಒಟ್ಟಿಗೆ ನಡೆದಿದ್ದರು ಅವರು.

ಬಸವಣ್ಣನ ಆರ್ಥಿಕತೆ ಶ್ರಮದ ಆರ್ಥಿಕತೆ ಎಂದು ವಿಸ್ತರಿಸಿ ಹೇಳಿದೆ. ಶ್ರಮವನ್ನು ಸಹಿಸಬೇಕು ಅಂದೆ. ಒಮ್ಮೆಗೇ ಆಗದಿದ್ದರೆ ಕ್ರಮಕ್ರಮವಾಗಿ ಸಹಿಸಬೇಕು ಅಂದೆ. ರೂಢಿಸಿಕೊಳ್ಳಬೇಕು ಅಂದೆ. ಸಹಕರಿಸುವುದನ್ನು ಕಲಿಯ
ಬೇಕು ಅಂದೆ. ಆದರೆ! …ಅಯ್ಯೋ ನಾವು ಮಂಚಣಕ್ರಮಿತನ ಜೊತೆಗೆ ವಿಮಾನಯಾನ ಮಾಡುತ್ತಿದ್ದೇವೆ! ಅಂದೆ. ಮಂಚಣಕ್ರಮಿತನ ಕಾವಿಬಟ್ಟೆ, ರುದ್ರಾಕ್ಷಿ, ವಿಭೂತಿ ಹಾಗೂ ಸಂಸ್ಕೃತ ಪಾಂಡಿತ್ಯಕ್ಕೆ ಮರುಳಾಗಿದ್ದೇವೆ ನಾವು, ಹಳ್ಳಿಯ ಮಂದಿ ಅಂದೆ. ಮಂಚಣಕ್ರಮಿತ ಕೊಲ್ಲುತ್ತಾನೆ, ಮರೆಯದಿರಿ ಅಂದೆ. ದೇವರ ಆಯುಧ ಬಳಸಿ ಕೊಲ್ಲುತ್ತಾನೆ ಮರೆಯದಿರಿ ಅಂದೆ. ಹೌದೆಂದು ತಲೆಯಾಡಿಸಿದರು.

ಎಲ್ಲ ನಾಟಕೀಯತೆಯನ್ನೂ ಕಳಚಿ, ತೀವ್ರ ಕಳಕಳಿಯಿಂದ ವಿನಂತಿಸಿಕೊಂಡೆ.

‘ದಯಮಾಡಿ!…ದಯಮಾಡಿ ನೀವು ಬಸವಣ್ಣನನ್ನು ಅಭಿವೃದ್ಧಿಯ ಹರಿಕಾರ ಎಂದು ಪರಿಗಣಿಸಿ ನೋಡಿ!… ನೀವು ಹಾಗೆ ಮಾಡಿದರೆ, ಉತ್ತರ ಕರ್ನಾಟಕವೇ ಏಕೆ, ಅಥವಾ ಭಾರತ ದೇಶವೇ ಏಕೆ, ಇಡೀ ವಿಶ್ವವನ್ನೇ ಅಭಿವೃದ್ಧಿಪಡಿಸಬಲ್ಲದು ಬಸವ ಮಾದರಿ’ ಅಂದೆ.

ನನ್ನ ಮಾತಿಗೆ ಸಮಕಾಲೀನ ವಿವರಣೆ ನೀಡಿದೆ. ‘1947ರ ತನಕ!… ಗಾಂಧೀಜಿ ನೇತೃತ್ವದಲ್ಲಿ ನಾವೆಲ್ಲರೂ ಬಸವ ಮಾದರಿಯನ್ನೇ ಅನುಸರಿಸಿದೆವು ತಾನೆ? ಗ್ರಾಮಸ್ವರಾಜ್ಯ ಎಂದು ಅದಕ್ಕೆ ಹೆಸರಿಟ್ಟಿದ್ದೆವು ತಾನೆ!… ಉತ್ತರ ಕರ್ನಾಟಕದ ಸ್ವಾತಂತ್ರ್ಯ ಚಳವಳಿಯ ಭವ್ಯ ಪರಂಪರೆಯನ್ನು ನೀವು ಮರೆತಿಲ್ಲ ತಾನೇ!’ ಎಂದು ಉದಾಹರಣೆ ಸಹಿತವಾಗಿ ಅವರಿಗೆ ವಿವರಿಸಿ ಹೇಳಿದೆ. ಎಲ್ಲ ಹೇಳಿ, ದೀರ್ಘವಾದ ನಿಟ್ಟುಸಿರೊಂದನ್ನು ಬಿಟ್ಟು, ‘ಈಗ!…, ನಾಚಿಕೆ ಮಾನ ಮರ್ಯಾದೆ ಮೂರೂ ಬಿಟ್ಟು ಮಂಚಣಕ್ರಮಿತನ ಹಾದಿ ಹಿಡಿದಿದ್ದೇವೆ ನಾವು! …ಭಾರತ ದೇಶವನ್ನು ಸಿಂಗಪುರ ಮಾಡಲು ಹೊರಟಿದ್ದೇವೆ ನಾವು’ ಎಂದು ಮಾತು ಮುಗಿಸಿದೆ. ಒಟ್ಟು ಕತೆಯ ನೀತಿಯಿದು: ಕೃಷಿ ಹಾಗೂ ಕೈಮಗ್ಗ ಉತ್ತರ ಕರ್ನಾಟಕದ ಎರಡು ಕಣ್ಣುಗಳು. ಕಣ್ಣು ಕಿತ್ತು, ಅಂಬಾನಿ, ಅದಾನಿಗಳು ತಯಾರಿಸಿದ ಅತ್ಯಾಧುನಿಕ ಕಪ್ಪುಕನ್ನಡಕ ತೊಡಿಸಿ, ಕುರುಡರಕೋಲು ಕೈಯಲ್ಲಿ ಹಿಡಿಸಿ, ನಡೆ ಎನ್ನುವುದು ಅಭಿವೃದ್ಧಿಯಲ್ಲ.

  • ಪ್ರಸನ್ನ, ರಂಗಕರ್ಮಿ, ಸಾಮಾಜಿಕ ಕಾರ್ಯಕರ್ತ
    (ಪ್ರಜಾವಾಣಿಯಲ್ಲಿ ಪ್ರಕಟಿತ ಅಂಕಣ)

#ಪವಿತ್ರಆರ್ಥಿಕತೆ
#SacredEconomy #MonsterEconomy #Karonakuch
#Basavanna #Basava #Sharana #Development #UttaraKarnataka https://www.prajavani.net/columns/sambhashane/basavanna-leader-development-572934.html

ನನ್ನ ವ್ಯವಹಾರಗಳು ಹೀಗಿವೆ!

ನನ್ನ ವೈಯಕ್ತಿಕ ಹಣಕಾಸಿನ ವ್ಯವಹಾರದ ಬಗ್ಗೆ ಹಾಗೂ ಗ್ರಾಮಸೇವಾಸಂಘ ನಡೆಸುತ್ತಿರುವ ಪವಿತ್ರ ಆರ್ಥಿಕತೆಯ ಸತ್ಯಾಗ್ರಹದ ಹಣಕಾಸಿನ ವ್ಯವಹಾರದ ಬಗ್ಗೆ ಅನೇಕರು ಪ್ರಶ್ನೆ ಮಾಡಿದ್ದಾರೆ. ಅವರೆಲ್ಲರಿಗೂ ಸೂಕ್ತ ಉತ್ತರವನ್ನು ನೀಡುವುದು ನನ್ನ ವೈಯಕ್ತಿಕ ಕರ್ತವ್ಯವೂ ಹೌದು, ಸಾಂಸ್ಥಿಕ ಅಗತ್ಯವೂ ಹೌದು.

ಉದಾಹರಣೆಗೆ, ಶ್ರೀನಾಥ ಎಂಬುವವರು ನನಗೆ ಬಂದಿದ್ದ ಗಾಂಧಿ ಸೇವಾ ಪ್ರಶಸ್ತಿಯ 5 ಲಕ್ಷ ರೂಪಾಯಿ ಎಲ್ಲಿ ಹೋಯಿತು ಎಂದು ಕೇಳಿದ್ದಾರೆ. ಪ್ರಶಸ್ತಿಯ ಸಂಪೂರ್ಣ ಮೊತ್ತವನ್ನು ಹೆಗ್ಗೋಡಿನ ಶ್ರಮಜೀವಿ ಆಶ್ರಮದ ನಿರ್ವಹಣೆಗಾಗಿ ಬಹಳ ಹಿಂದೆಯೇ ಕೊಟ್ಟಿರುತ್ತೇನೆ. ಶ್ರೀನಾಥರೇ ಮತ್ತೊಂದು ಪ್ರಶ್ನೆ ಕೇಳಿ, ಈಗಿನ ಸತ್ಯಾಗ್ರಹದ ಪೋಸ್ಟ್‍ಗಳನ್ನು ಯಾರು ಸ್ಪಾನ್‍ಸರ್ ಮಾಡಿದರು ಎಂದು ಕೇಳಿದ್ದಾರೆ. ನಾವು ಮಾಡಿರುತ್ತೇವೆ ಹಾಗೂ ಸ್ನೇಹಿತರುಗಳು ನೀಡಿರುವ ಸಣ್ಣ ಪುಟ್ಟ ದೇಣಿಗೆಯ ಮೂಲಕ ಮಾಡಿರುತ್ತೇವೆ. ಪ್ರತಿ ತಿಂಗಳ ದಾನಿಗಳು ಹಾಗೂ ಹಿತೈಷಿಗಳು ಅಭಿಯಾನಕ್ಕೆ ಈ ದೇಣಿಗೆಯನ್ನು ನೀಡುರುತ್ತಾರೆ, ಪ್ರಸ್ತುತಸಾಲಿನ ಆಡಿಟಿಂಗ್ ಆದ ನಂತರ, ತಿಳಿಸಲಾಗುವುದು, ಇಷ್ಟವಿದ್ದವರು ಕಛೇರಿಗೆ ಬಂದು ಪರಿಶೀಲಿಸಬಹುದಾಗಿದೆ.

ಸ್ಪಾನ್ಸರ್ಡ್ ಪೋಸ್ಟ್ ಏಕೆ ಬೇಕಿತ್ತು ಎಂದು ಕೆಲವರು ಪ್ರಶ್ನಿಸಿದ್ದಾರೆ. ಒಳ್ಳೆಯ ಪ್ರಶ್ನೆ. ನಮ್ಮವರ ನಡುವೆಯೇ ಉಳಿದು ಈ ಚಳುವಳಿ ಕೂಪಮಂಡೂಕವಾಗಬಾರದು, ನಮ್ಮವರಲ್ಲದವರನ್ನೂ ತಲುಪಬೇಕು ಎಂಬುದು ನಮ್ಮ ಆಶಯ. ಹಾಗಾಗಿ ಮಾಡಿದೆವು. ಈಗ ಬರುತ್ತಿರುವ ವಿಮರ್ಶಾತ್ಮಕ ಪ್ರಶ್ನೆಗಳನ್ನು ಎದುರಿಸಬೇಕೆಂದೇ ಹಾಗೆ ಮಾಡಿದೆವು.

ನಾನು ಒಬ್ಬ ಜೋಕರ್ ಎಂದು, ಒಂದು ಸಂದರ್ಭದಲ್ಲಿ ನಾನು ಹೇಳಿಕೊಂಡದ್ದನ್ನು ಅನೇಕರು ಹೌದು ಹೌದು ಎಂದು ಸಮ್ಮತಿ ಸೂಚಿಸಿದ್ದಾರೆ. ಸಂತೋಷ. ಹಿಂದಿರದ ಮುಂದಿರದ, ಬಡಜೋಕರನಾಗಿ ಇನ್ನು ಮುಂದೆ ಉಳಿಯುವ ನಿರ್ಧಾರ ಮಾಡಿದ್ದೇನೆ ನಾನು. ಹಣವನ್ನು ತಿರಸ್ಕರಿಸಿದ್ದೇನೆ. ಅಧಿಕಾರ ರಾಜಕಾರಣದ ಮೆಟ್ಟಿಲೇರುವ ಯಾವ ಆಶಯವೂ ನನಗಿಲ್ಲ. ನಾನು ಜೋಕರ್ ಎಂದದ್ದನ್ನು ನನಗೆ ನೆನಪಿಸಿದವರಲ್ಲಿ ಅನೇಕರು ಭಟ್ಟರು ಶಾಸ್ತ್ರಿಗಳು ಜಂಗಮರು ಇರುವುದು ಆಶ್ಚರ್ಯದ ಸಂಗತಿಯೇನಲ್ಲ. ಅವರೆಲ್ಲರೂ ಪುರಂದರದಾಸರನ್ನು ಓದಿಕೊಂಡವರೇ ಆಗಿರುತ್ತಾರೆ. ಹಾಗಾಗಿ ನನ್ನ ಮಾತಿನ ಒಳಾರ್ಥ ಅರಿವಾಗಿದೆ ಅವರಿಗೆ. ದಾಸರು ಹೇಗೆ, ತನ್ನನ್ನೇ ಗೇಲಿಮಾಡಿಕೊಳ್ಳುತ್ತ ಆಪಾದನೆಗಳಿಗೆ ತನ್ನನ್ನು ಗುರಿಪಡಿಸಿಕೊಳ್ಳುತ್ತ ಹಳತಿನಿಂದ ಕಳಚಿಕೊಂಡು ಹೊರಬಂದರು ಎಂಬ ಅರಿವಿರುವವರೇ ಹೌದು ಅವರೆಲ್ಲ.

ನಿಜವಾದ ಜೋಕರನಾಗಲಿಕ್ಕೆ ನನಗೆ ಇನ್ನೂ ಬಹಳಷ್ಟು ತಯಾರಿಬೇಕಿದೆ. ಬಹಳಷ್ಟು ನಿಂದನೆಗೆ ಗುರಿಯಾಗಬೇಕಿದೆ ನಾನು. ನಿಮ್ಮ ಸಹಕಾರಕ್ಕೆ ಧನ್ಯವಾದಗಳು. ಆದರೆ ಸಣ್ಣದೊಂದು ಸಂಗತಿ ನಿಮ್ಮ ಗಮನದಲ್ಲಿರಲಿ. ನನ್ನನ್ನು ಗೇಲಿ ಮಾಡಿ, ಆದರೆ ನಾನು ಪ್ರತಿನಿಧಿಸುವ ರಂಗಮಾಧ್ಯಮವನ್ನು ಗೇಲಿ ಮಾಡದಿರಿ ದಯಮಾಡಿ. ನಾಟಕವೆಂಬುದು ಪಂಚಮವೇದ ಎಂಬುದನ್ನು ಮರೆಯದಿರಿ.
ಪ್ರೀತಿಯಿಂದ
-ಪ್ರಸನ್ನ
ರಂಗಕರ್ಮಿ ಮತ್ತು ನಾಟಕಕಾರ,
ಗ್ರಾಮ ಸೇವಾ ಸಂಘ

ನನ್ನ ದು:ಖದ ಕಟ್ಟೆಯೊಡೆದಿತ್ತು!


ಪವಿತ್ರ ಆರ್ಥಿಕತೆಯ ಜಾರಿಗಾಗಿ ಇತ್ತೀಚೆಗೆ ನಾನು ಕೈಗೊಂಡಿದ್ದ ಉಪವಾಸ ವ್ರತವನ್ನು ಬೆಂಬಲಿಸುತ್ತಾ ಕೆಲವು ಸ್ನೇಹಿತರು, ನೀವು ಕೈಗೊಂಡ ವ್ರತದ ಸಮಯ ಸೂಕ್ತವಿರಲಿಲ್ಲ ಎಂದಿದ್ದಾರೆ. ಉಪವಾಸದಂತಹ ಕಠಿಣ ಕ್ರಮವನ್ನು ಕೈಗೊಳ್ಳುವ ಮೊದಲು ಯೋಚಿಸಿ ನಿರ್ಧರಿಸಬೇಕು ಎಂಬುದನ್ನು ನಾನು ಒಪ್ಪುತ್ತೇನೆ. ಗುಳೆ ಎದ್ದಿದ್ದ ಬಡವರ ದೀನ ಮುಖಗಳನ್ನು ಪತ್ರಿಕೆಗಳಲ್ಲಿ ಕಂಡು ಧಿಡೀರನೆ ನಿರ್ಧಾರ ತಳೆದಿದ್ದರೆ ನಿಮ್ಮ ಮಾತು ಒಪ್ಪುತ್ತಿದ್ದೆ. ಆದರೆ ಪರಿಸ್ಥಿತಿ ಹಾಗಿರಲಿಲ್ಲ. ಚರಕ ಮುಚ್ಚಿತ್ತು ! ಚರಕದ ಪರವಾಗಿ ಸಹಾಯ ಯಾಚಿಸಲೆಂದು ಬೆಂಗಳೂರಿಗೆ ಬಂದಿದ್ದೆ. ಹಾಗೆ ಬಂದವನು ಬೆಂಗಳೂರಿನ ನನ್ನ ತಮ್ಮನ ಅನುಕೂಲಕರ ಮನೆಯಲ್ಲಿ, ನಿಮ್ಮಂತೆಯೇ, ಅನುಕೂಲಕರ ಬಂಧಿಯಾಗಿದ್ದೆ. ಆಗ ಗುಳೆ ಕೆಲಸಗಾರರ ಮುಖ ಪತ್ರಿಕೆಗಳಲ್ಲಿ ಕಂಡೆ. ನನ್ನ ದು:ಖದ ಕಟ್ಟೆಯೊಡೆಯಿತು. ಯಾವ ಸಂಸ್ಥೆಯನ್ನು, ಬಡವರು ಗುಳೆ ಏಳಬೇಕಾದ ಸಂದರ್ಭವೇ ಬಾರದಿರಲಿ ಎಂದು, ಎರಡೂವರೆ ದಶಕ ದುಡಿದು ಕಟ್ಟಿದ್ದೆನೋ, ಯಾವುದು ಪವಿತ್ರ ಆರ್ಥಿಕತೆಗೊಂದು ಗಟ್ಟಿ ಮಾದರಿಯಾಗತೊಡಗಿತ್ತೋ, ಅಂತಹ ಚರಕ ತನ್ನದೇನೂ ತಪ್ಪಿರದೆ ಮುಚ್ಚಿತ್ತು. ಇತ್ತ ಇಡೀ ದೇಶದ ಬಡವರು ಹಸಿದ ಹುಳುಗಳಂತೆ ಮೇಲೆದ್ದು ಹರಿದಾಡತೊಡಗಿದ್ದರು. ತಮ್ಮದಾದ ಯಾವುದೇ ತಪ್ಪಿರದ ಈ ದೇವರಮಕ್ಕಳಿಗೆ ಶಿಕ್ಷೆ ನೀಡುತ್ತಿರುವ ನಾವು ಪಾಪಿಗಳು ಅನ್ನಿಸಿತು. ಉಪವಾಸ ಕುಳಿತೆ.
-ಪ್ರಸನ್ನರಂಗಕರ್ಮಿ ಮತ್ತು ನಾಟಕಕಾರಗ್ರಾಮಸೇವಾಸಂಘ#SacredEconomy #Karonakuch#MonsterEconomy #GramSevaSangh 
www.gramsevasangh.or | Email ID: gramsevasanghindia@gmail.com | Mobile: 998004391

ಪ್ರಕೃತಿಮಾತೆ

ಪ್ರಕೃತಿಮಾತೆ ಕರೋನ ಮಾರಿಯ ರೂಪತಾಳಿ ಈ ದೆಶಕ್ಕೆ ಬಂದಿದ್ದಾಳೆ.
ಏಕೆ ಗೋತ್ತೆ?
ರಾಕ್ಷಸ ಆರ್ಥಿಕತೆಯನ್ನು ದಮನ ಮಾಡಲೆಂದು ಬಂದಿದ್ದಾಳೆ.
ನಿವೇ ಯೋಚಿಸಿ.
ಈಕೆ ಬಂದ ಕೆಲವೆ ದಿನಗಳಲ್ಲಿ ಗಂಗೆ ಶುದ್ದಳಾಗಿ ಹರಿಯತೋಡಗಿದಳು.
ಯಮುನೆ, ಕೃಷ್ಣೆ, ಕಾವೇರಿಯರು ಶುದ್ದವಾಗಿ ಹರಿಯ ತೋಡಗಿದರು.
ಹಿಮಾಲಯ ದರ್ಶನವಾಗತೋಡಗಿತು ನಮಗೆ.
ಅಷ್ಟೆ ಅಲ್ಲಾ ಇಕೆಯಿಂದಾಗಿ ನೇಕಾರನಿಗೆ ತೋಂದರೆಯಾಗಿಲ್ಲಾ.
ಕುಂಬರನಿಗೆ ತೋಂದರೆಯಾಗಿಲ್ಲಾ.
ರೈತನಿಗೆ ತೋಂದರೆಯಾಗಿಲ್ಲಾ.
ಕುರುಬನಿಗೆ ತೋಂದರೆಯಾಗಿಲ್ಲಾ.
ಅಷ್ಟೆ ಏಕೆ ಇಕೆಯಿಂದಾಗಿ ನಗರದ ಕಾರ್ಮಿಕನಿಗೆ ಕೂಡ ಸೋಂಕುಹರಡಿ
ತೊಂದರೆ ಆದದ್ದು ತೀರ ಕಡಿಮೆ.
ಈವರಿಗೆಲ್ಲಾ ತೊಂದರೆ ಕೋಡುತ್ತಿರುವುದು ರಾಕ್ಷಸತೆ ಮಾತ್ರ.
ಎನಿದರ ಅರ್ಥ?
ದೇವಿ ಹೇಳುತ್ತಿದ್ದಾಳೆ ನಿವೆಲ್ಲರೂ ಸೇರಿ ಪವಿತ್ರ ಅರ್ಥಿಕತೆಯನ್ನು ಜಾರಿಗೆ ತನ್ನಿ.
ಈ ದೇಶದಿಂದ ರಕ್ಷಸತೆಯನ್ನು ಹೊರದಬ್ಬಿರಿ ಎಂದು.

-ಇದು ಗ್ರಾಮಸೇವಾ ಸಂಘದ ಕರೆ

Nature Goddess

Nature Goddess has taken the shape of #CoronaVirus
and entered India.
Because she wants to destroy the #MnsterEconomy,
Yes!
Think, the moment she came into India
Ganga starts flowing clean,
Himalaya starts shining,
not only that she has not touched,
the peasant, the weaver, the Dalit, the Shephered,
not even the city labourer, with the disease in any big way.
Why because she wants all of to come together to setup the #SacredEconomy
and throw the monster out of this country.
-Gramseva sangh

प्रकृति माता

प्रकृति माता करोनका रूप दरकार भारत में आएं हैं
क्यूँ आयी हैं
राक्षसी अर्थ व्यवस्थाको कथम करने आयी हैं
सोचियें मा आते ही गंगा क्षुधा बेहने लगी
हिमालय का दर्शण होने लगा हमें
इतना ही नहीं
किसानों को छुहा नहीं माने
बुनकरों को छुहा नहीं माने
दलितों को छुहा नहीं माने
शहर के मज़दूरों को भी छुहा नहीं माने
क्यों मा चाहती हैं हम सब मिलकर पवित्र अर्थव्यवस्था लागू करे
और इस देश से राक्षसों को हटाएं
– ग्राम सेवा संघ 

@gramsevasanghindia@prasanna #monstereconomy 
प्रकृति माता  | Prakruti Matha | #karonakuch #sacredeconomy